ಪೋಸ್ಟ್‌ಗಳು

ಫ್ರೀ ಗ್ಯಾಸ್ ಉಜ್ವಲ ಯೋಜನೆ ಮತ್ತೆ ಅರ್ಜಿ ಸಲ್ಲಿಕೆ ಆರಂಭ.!

ಇಮೇಜ್
ಪ್ರಧಾನಮಂತ್ರಿಯ ಮಹತ್ತರ ಯೋಜನೆಗಳಲ್ಲಿ ಒಂದಾದ ಉಜ್ವಲ ಉಚಿತ ಗ್ಯಾಸ್ ಯೋಜನೆ ( Ujwal Scheme) ಮತ್ತೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಅರ್ಜಿ ಸಲ್ಲಿಸಲು ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್‌ ಪಾಸ್ ಬುಕ್, 3 ಫೋಟೋ ಮತ್ತು ಓರ್ವ ಮನೆಯ ಸದಸ್ಯರ ಆಧಾರ್ ಕಾರ್ಡ್ ಈ ಎಲ್ಲಾ ದಾಖಲೆಗಳೊಂದಿಗೆ  ಗ್ರಾಮ ಒನ್ (GramaOne),  ನಾಗರೀಕ ಸೇವಾ ಕೇಂದ್ರಕ್ಕೆ ಭೇಟಿನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಲಿಂಕ್ 2.0ದ ಅಡಿಯಲ್ಲಿ ಹೊಸ ಕನೆಕ್ಷನ್‌ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು :  ಅರ್ಜಿದಾರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಒಂದೇ ಮನೆಯಲ್ಲಿ ಇನ್ಯಾವುದೇ OMC ಯಿಂದ ಬೇರೆ ಯಾವುದೇ ಎಲ್‌ಪಿಜಿ ಸಂಪರ್ಕ ಇರಬಾರದು. ಕೆಳಗಿನ ಯಾವುದೇ ವರ್ಗಗಳಿಗೆ ಸೇರಿದ ವಯಸ್ಕ ಮಹಿಳೆ - SC, ST, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ), ಅತ್ಯಂತ ಹಿಂದುಳಿದ ವರ್ಗಗಳು (MBC), ಅಂತ್ಯೋದಯ ಅನ್ನ ಯೋಜನೆ (AAY), ಚಹಾ ಮತ್ತು ಮಾಜಿ ಚಹಾ ತೋಟದ ಬುಡಕಟ್ಟುಗಳು, ಅರಣ್ಯವಾಸಿಗಳು, ದ್ವೀಪಗಳು ಮತ್ತು ನದಿಗಳ ಬಳಿ ವಾಸಿಸುವವರು, SECC ಕುಟುಂಬಗಳು (AHL TIN) ಅಥವಾ 14-ಪಾಯಿಂಟ್ ಘೋಷಣೆಯ ಪ್ರಕಾರ ಯಾವುದೇ ಬಡ ಕುಟುಂಬಗಳ ಅಡಿಯಲ್ಲಿ ಸೇರ್ಪಡೆಗೊಂಡಿವೆ. ಬೇಕಾಗುವ ದಾಖಲೆಗಳು : ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳುವುದು (KYC) ಅರ್ಜಿದಾರರರು ಆಧಾರ ಕಾರ್ಡ್‌ನಲ್ಲಿರುವ ವಿಳಾಸದಲ್ಲಿಯೇ ವಾಸಿಸುತ್ತಿದ್ದರೆ ಗುರುತಿನ...

PM ಮೋದಿಯವರು ಚೆಸ್ ಮಾಂತ್ರಿಕ ಪ್ರಗ್ನಾನಂದ ಅವರನ್ನು ಭೇಟಿಯಾಗಿದ್ದಾರೆ.!

ಇಮೇಜ್
ಪಿಎಂ ಮೋದಿ ಚೆಸ್ ಮಾಂತ್ರಿಕ ಪ್ರಗ್ನಾನಂದ ಅವರನ್ನು ಭೇಟಿಯಾಗಿದ್ದಾರೆ, ‘ ನೀವು ಉತ್ಸಾಹ ಮತ್ತು ಪರಿಶ್ರಮವನ್ನು ವ್ಯಕ್ತಿತ್ವಗೊಳಿಸುತ್ತೀರಿ ’ ಎಂದು ಶುಭಾಶಯ ಕೋರಿದರು. Narendra Modi met chess prodigy R Praggnanandhaa, days after the latter clinched the silver medal in the FIDE World Cup. FIDE ಫೈನಲ್ ನಲ್ಲಿ ಐದು ಬಾರಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೆನ್ ವಿರುದ್ಧ 18 ವರ್ಷದ ಪ್ರಗ್ನಾನಂದ ಸೋತರು, ಆದರೆ ದಾರಿಯುದ್ದಕ್ಕೂ ಇತಿಹಾಸವನ್ನು ಮಾಡಿದರು ಮತ್ತು ಪ್ರತಿಷ್ಠಿತ ಅಭ್ಯರ್ಥಿಗಳ ಪಂದ್ಯಾವಳಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡರು

ಕುರಿ ಮಾಂಸದ ಬದಲು ದನದ ಮಾಂಸದ ಬಿರಿಯಾನಿ; ಮಟನ್ ತಿನ್ನುವವರೇ ಎಚ್ಚರ!

ಇಮೇಜ್
ಪ್ರವಾಸಿಗರಿಗೆ ಕುರಿ ಮಾಂಸದ ಬದಲಿಗೆ ದನದ ಮಾಂಸದ ಬಿರಿಯಾನಿ ನೀಡುತ್ತಿರುವ ಪ್ರಕರಣ ಮಲೆನಾಡಿನಲ್ಲಿ ಪೊಲೀಸರು ದಾಳಿ ಮಾಡಿ ಬಯಲಿಗೆಳೆದಿದ್ದಾರೆ, ಈ ಘಟನೆ ಚಿಕ್ಕಮಗಳೂರಿನ ಕೆಲವು ಹೋಟೆಲ್‌ಗಳಲ್ಲಿ ನಡೆದಿದೆ. ಚಿಕ್ಕಮಗಳೂರು : ಕಾಫಿನಾಡು ನಾನ್ ವೆಜ್‍ಗೂ ( Non Veg ) ಕೂಡ ಫೇಮಸ್ ಆಗಿರುವುದು ಎಲ್ಲರಿಗೂ ತಿಳಿದ ವಿಚಾರ. ಒಂದು ಹೋಟೇಲ್ ಗಿಂತ ಮತ್ತೊಂದು ಹೋಟೇಲ್ ರುಚಿಕರ, ಶುಚಿಗೆ ಹೆಸರುವಾಸಿ, ಆದರೆ ಇದೀಗ ಪೊಲೀಸರ ದಾಳಿಯಿಂದ ಕೆಲ ಹೋಟೇಲ್ ನಿಜ ಬಣ್ಣ ಬಯಲಾಗಿದೆ. ಕುರಿ ಮಾಂಸದ ಬಿರಿಯಾನಿ ಬದಲು ಗೋ ಮಾಂಸದ ಬಿರಿಯಾನಿ ನೀಡಿ ಪೊಲೀಸರ ಅತಿಥಿ ಆಗಿದ್ದಾರೆ.  ಚಿಕ್ಕಮಗಳೂರು ಕಾಫಿನಾಡು ಹೇಳಿಕೇಳಿ ಪ್ರವಾಸಿ ಜಿಲ್ಲೆ. ಪ್ರವಾಸೋದ್ಯಮದಿಂದಲೇ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ.ಆದರೆ ಪ್ರವಾಸಿಗರನ್ನ ಆಕರ್ಷಿಸೋದರ ಜೊತೆ ಹಣ ಮಾಡುವ ಉದ್ದೇಶದಿಂದ ಕೆಲ ಹೋಟೆಲ್ಗಳಲ್ಲಿ ಕುರಿ ಮಾಂಸದ (ಮಟನ್) ಬದಲು ದನದ ಮಾಂಸದಲ್ಲಿ ಬಿರಿಯಾನಿ ಸೇರಿದಂತೆ ನಾನ್ ವೆಜ್ ಅಡುಗೆ ಮಾಡುತ್ತಿದ್ದಾರೆ.  ಕುರಿ ಮಟನ್ ಕೆಜಿಗೆ 700-800 ರೂಪಾಯಿ ಇದೆ, ಅದೆ ದನದ ಮಟನ್ 200-300 ರೂಪಾಯಿಗೆ ಸಿಗುತ್ತೆ. ಕೆಲ ಹೋಟೆಲ್ ಮಾಲೀಕರು ಹಣ ಮಾಡುವ ಉದ್ದೇಶದಿಂದ ಕುರಿ ಮಟನ್ ಜೊತೆಗೆ ದನದ ಮಾಂಸ ಮಿಕ್ಸ್ ಮಾಡಿ ಅಡುಗೆ ಮಾಡಿ ಪ್ರವಾಸಿಗರಿಗೆ ನೀಡುತ್ತಿದ್ದಾರೆ. ಸ್ಥಳಿಯರ ದೂರಿನ ಮೇರೆಗೆ ನಗರದ ಎವರೆಸ್ಟ್ ಹಾಗೂ ಬೆಂಗಳೂರು ಹೋಟೆಲ್ ಮೇಲೆ ಪೊಲೀಸರು ದಾಳ...

ದಕ್ಷಿಣ ಕನ್ನಡ ಸಹಕಾರಿ ಬ್ಯಾಂಕ್‌ನಲ್ಲಿ 123 ಹುದ್ದೆ ನೇಮಕ: ಕ್ಲರ್ಕ್‌, ಕಂಪ್ಯೂಟರ್ ಪ್ರೊಗ್ರಾಮರ್‌ಗಳಿಗೆ ಅರ್ಜಿ ಆಹ್ವಾನ.

ಇಮೇಜ್
  Image credit : Pixabay ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಲ್ಲಿ ದ್ವಿತೀಯ ದರ್ಜೆ ಕ್ಲರ್ಕ್‌ ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯುಳ್ಳವರು ಅರ್ಜಿ ಹಾಕಬಹುದು. ಒಟ್ಟು 125 ಹುದ್ದೆಗಳಿವೆ. ಹುದ್ದೆ     :  ಕಂಪ್ಯೂಟರ್ ಪ್ರೋಗ್ರಾಮರ್ - 02                 ದ್ವಿತೀಯ ದರ್ಜೆ ಕ್ಲರ್ಕ್‌         - 123 ಭಾರತೀಯ ಅಂಚೆ ಇಲಾಖೆ (Post Office) 30041 ಬ್ರಹತ್ ನೇಮಕಾತಿ ವೇತನ ಶ್ರೇಣಿ : ಕಂಪ್ಯೂಟರ್ ಪ್ರೋಗ್ರಾಮರ್ : Rs.36985-89,600. ದ್ವಿತೀಯ ದರ್ಜೆ ಕ್ಲರ್ಕ್‌          : Rs.24910-55,655. ವಿದ್ಯಾರ್ಹತೆ ಹಾಗೂ ಆಯ್ಕೆ ವಿಧಾನ : ಕಂಪ್ಯೂಟರ್‌ ಪ್ರೋಗ್ರಾಮರ್ - ಎಂಸಿಎ ಅಥವಾ ಬಿಇ ಇನ್‌ ಕಂಪ್ಯೂಟರ್ ಸೈನ್ಸ್‌ ಅಥವಾ ಎಂಎಸ್ಸಿ ಇನ್ ಕಂಪ್ಯೂಟರ್ ಸೈನ್ಸ್‌ ಪಾಸ್. ಜತೆಗೆ ಕನಿಷ್ಠ 3 ವರ್ಷ ಸೇವಾನುಭವ ಹೊಂದಿರಬೇಕು. ಈ ಹುದ್ದೆಗಳಿಗೆ 200 ಅಂಕಗಳಿಗೆ ಕನ್ನಡ ಭಾಷೆ, ಜೆನೆರಲ್ ಇಂಗ್ಲಿಷ್, ಕಂಪ್ಯೂಟರ್ ಅರಿವು ಕುರಿತು ಪ್ರಶ್ನೆಗಳ ಪರೀಕ್ಷೆ ಇರುತ್ತದೆ. ಅರ್ಜಿ ಲಿಂಕ್ ( Apply Here ) ದ್ವಿತೀಯ ದರ್ಜೆ ಕ್ಲರ್ಕ್ -  ಯಾವುದೇ ಪದವಿ / ಸ್ನಾತಕೋತ್ತರ ಪದವಿ ಜತೆಗೆ ಕನಿಷ್ಠ 6 ತ...

ಗ್ರಹಲಕ್ಷ್ಮಿ ಸ್ಕೀಮ್ : ನಾಳೆ ಸುಮಾರು 1.10 ಕೋಟಿ ಮಹಿಳೆಯರ ಖಾತೆಗೆ 2,000 ರೂ. ಜಮಾ : ಸಿಎಂ.

ಇಮೇಜ್
ರಾಜ್ಯ ಸರ್ಕಾರದ ಮಹತ್ವದ ಗೃಹಲಕ್ಷ್ಮೀ ಯೋಜನೆಗೆ ನಾಳೆ ಚಾಲನೆ ನೀಡಲಾಗುತ್ತಿದ್ದು, ಸುಮಾರು 1.10 ಕೋಟಿ ಮಹಿಳೆಯರ ಖಾತೆಗೆ 2,000 ರೂ. ಜಮಾ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಗೆ ನಾಳೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ. ನಾಳೆಯ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಭಾಗಿಯಾಗಲಿದ್ದಾರೆ. 1.10 ಕೋಟಿ ಫಲಾನುಗಳಿಗೆ ಹಣ ಬಿಡುಗಡೆ ಮಾಡುತ್ತೇವೆ. ಮಹಿಳೆಯರ ಖಾತೆಗೆ ನಾಳೆಯೇ ಹಣ ಜಮಾ ಆಗಲಿದೆ ಎಂದು ತಿಳಿಸಿದರು.

ಚೆಸ್‌ ಸೂಪರ್‌ಸ್ಟಾರ್‌ ಪ್ರಜ್ಞಾನಂದನ ತಂದೆ-ತಾಯಿಗೆ ಬಿಗ್ ಗಿಫ್ಟ್ ನೀಡಿದ ಆನಂದ್ ಮಹೀಂದ್ರ .!

ಇಮೇಜ್
  ಚೆಸ್‌ ಮಾಸ್ಟರ್ ಪ್ರಜ್ಞಾನಂದನ ತಂದೆ-ತಾಯಿಗೆ ಎಲೆಕ್ಟ್ರಿಕ್‌ ಕಾರ್‌ ಗಿಫ್ಟ್‌ ನೀಡಿದ ಆನಂದ್‌ ಮಹೀಂದ್ರಾ! ಆಗಸ್ಟ್ 28 : ಚೆಸ್‌ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸೆನ್‌ ವಿರುದ್ಧ ಸೋಲು ಕಂಡು ರನ್ನರ್‌ಅಪ್‌ ಸ್ಥಾನ ಪಡೆದ ಆರ್‌. ಪ್ರಜ್ಞಾನಂದನ ಪಾಲಕರಿಗೆ ಮಹೀಂದ್ರಾ & ಮಹೀಂದ್ರಾ ಕಂಪನಿಯ ಚೇರ್ಮನ್‌ ಆನಂದ್‌ ಮಹೀಂದ್ರಾ ಎಲೆಕ್ಟ್ರಿಕ್‌ ಕಾರು ಉಡುಗೊರೆಯಾಗಿ ನೀಡಲಿದ್ದಾರೆ.  ಹೌದು, ಚೆಸ್ ವಿಶ್ವಕಪ್ ನಲ್ಲಿ ರನ್ನರ್ ಅಪ್ ಆಗಿ ದೇಶದ ಹೆಮ್ಮೆಯ ಚೆಸ್ ಮಾಸ್ಟರ್ ಪ್ರಜ್ಞಾನಂದನಿಗೆ ಮಹೀಂದ್ರಾ XUV 400 ಕಾರ್ ನೀಡುವುದಾಗಿ ಘೋಷಣೆಯನ್ನು ಮಹೀಂದ್ರಾ ಕಂಪನಿಯ ಚೇರ್ಮನ್ ಮಾಡಿದ್ದಾರೆ.

ಕಾರವಾರದ ಅರಬ್ಬಿ ಸಮುದ್ರದಲ್ಲಿ ಅತೀ ಉದ್ದದ ಬಂಗಡೆ ಮೀನು ಪತ್ತೆ.!

ಇಮೇಜ್
ಕಾರವಾರ : ಭಾರತದಲ್ಲಿ ಇದುವರೆಗೆ ಪತ್ತೆಯಾದ ಬಂಗಡೆಗಳಲ್ಲೆ ಅತಿ ದೊಡ್ಡದಾದ ಹಾಗೂ ಉದ್ದವಾದ, ಬಂಗಡೆ ಮೀನು ಕಾರವಾರದ ಅರಬ್ಬಿ ಸಮುದ್ರದಲ್ಲಿ ಮೀನುಗಾರರ ಬಲೆಗೆ ಸಿಕ್ಕಿದೆ, ಇದು ಕರಾವಳಿ ಭಾಗದಲ್ಲಿ ಕುತೂಹಲ ಮೂಡಿಸಿದೆ. Pic : Biggest fish found in Karwar ಕಾರವಾರದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಆನಂದು ರಾಮಾ ಹರಿಕಂತ್ರ ಅವರಿಗೆ ಸಂಬಂಧಪಟ್ಟ ಎಂ.ಐ. ಇಂಜಿನ್ ಹೊಂದಿದ ಖಾಕಿ ದೋಣಿಯ ಬೀಡು ಬಲೆಗೆ ಬಿದ್ದ ಮೀನುಗಳಲ್ಲಿ ಒಂದು ದೊಡ್ಡ ಗಾತ್ರದ ಬಂಗಡೆ ಮೀನು ದೊರೆತಿದೆ, ಇದು ಮೀನುಗಾರರ ಅಚ್ಚರಿಗೆ ಕಾರಣವಾಗಿದೆ. ಆನಂದು ರಾಮ ಹರಿಕಂತ್ರ ಅವರಿಂದ ಈ ಬಂಗಡೆ ಮೀನನ್ನು ಪಡೆದುಕೊಂಡ ನಹೀನ ಹರಿಕಂತ್ರ ಎನ್ನುವವರು ಈ ಬಂಗಡೆ ಮೀನುಗಾರರ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ವಿನಾಯಕ ಹರಿಕಂತ್ರ ಅವರಿಗೆ ನೀಡಿದ್ದಾರೆ. ಸಮುದ್ರದಲ್ಲಿ ಸಿಕ್ಕ ಬಂಗುಡೆ ಮೀನು ಸುಮಾರು 48 ಸೆ.ಮೀ, ಉದ್ದ, ಸುಮಾರು 12 ಸೆ.ಮೀ. ಅಗಲವಿದೆ. ಭಾರತದಲ್ಲಿ ಇದುವರೆಗೆ ದೊರೆತ ಅತಿ ದೊಡ್ಡ ಬಂಗುಡೆ ಜಾತಿಯ ಮೀನು ಇದಾಗಿದೆ. ಈ ಹಿಂದೆ ಸಿಕ್ಕ ಬಂಗುಡೆ ಮೀನು ಸುಮಾರು ಗಂಡು ಬಲಗಡೆ 36 ಸೆ.ಮೀ ಉದ್ದ ಹಾಗೂ ಹೆಣ್ಣು ಬಂಗಡೆ 42 ಸೆ.ಮೀ. ಉದ್ದವಿದೆ ಎಂದು ಕಡಲ, ಜೀವ ಶಾಸ್ತ್ರದ ಶಿವಕುಮಾರ ಹರಗಿ ಮಾಹಿತಿ ನೀಡಿದ್ದಾರೆ. ಆದರೆ ಕಾರವಾರದಲ್ಲಿ ಸಿಕ್ಕ ಮೀನು ಇದಕ್ಕಿಂತ ದೊಡ್ಡದಾಗಿದೆ. ಈ ಮೀನನ್ನು ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಸಂರಕ್ಷಣೆ ಮಾಡಲಾಗಿದ್ದು. ಮತ್ತು ಈ ಬಗ್ಗೆ...